Monday, February 20, 2012

ಕವಿತೆ


-1-

ಅಕಾರಣ ನಿಲ್ಲಿಸಿದ 
ನಗೆ
ಬದುಕಿನ
ಸಂಕಟಗಳಲ್ಲಿ ನಡೆದು ಹೋಗುವವರ
ಮನಗಳಲ್ಲಿ ಸತ್ಯಗಳೂ ಕಡಿಮೆ
ಸುಳ್ಳುಗಳೂ ಸತ್ತು ಹೋಗಿ
ಮಾಗಿಗೆ ಮಾಗಿ
ಹಳಸುವ ಹಲಸು ಸೋಗೆ...


-2-


ದಶಾವತಾರಿ ನಿನ್ನ 
ಮುಡಿ 
ಹೆರಳು
ಗೋಸುಂಬೆ
ಹೆರುವ ಖಾಲಿ ಬಟ್ಟೆ
ಊರ್ಮಿಳೆಯ ಎಡ ಗಾಲಿನ ಪ್ರಸವ
ಕೋಡ ಗಲ್ಲ ಕೂಸು..,


-3-


ನಕ್ಕಿದ್ದೆ 
ಅಂದೆಂದೋ 
ಅವಳ ಕಾತರಿಸುವ ಹುಬ್ಬುಗಳಿಗೆ 
ಬಲಿಯಾಗಿದ್ದೆ
ನನ್ನ ಆಸೆಯ ಸಿಡಿ ಮಿಡಿ ಪಾಶಕ್ಕೆ 
ಕಾಲಿಗೆ ಎಡವಿ ಬಿದ್ದು
ಗೋರಿ 
ಅಲ್ಲಿ ನೋಡಿದರೆ 
ನನ್ನದೇ ಬಿಂಬ
ಕಳ್ಳ ಕರಾಳ
ನಿಂತಿದ್ದ
ಮರಣದ ಹಗ್ಗ ಹಿಡಿದು
ಜಾಣ ಮರೆವಲ್ಲಿ


-4-


ನೀಗುವ ಹಮ್ಮು ಬಿಮ್ಮುಗಳ
ಕಳೆದ
ಸ್ವರ್ಗಾರೋಹಣದ ದೃಶ್ಯ
ಹಿಂಬಾಲಿಸುವ 
ಶ್ವಾನ
ಬುದ್ಧಿ
ನಾನು ಬದುಕಿದ್ದೆಷ್ಟು
ಸತ್ಯ ಅದಕ್ಕೆ 
ಒಪ್ಪಿಸಬೇಕಿದೆ
ಸಾಕ್ಷಿ;
ನಮ್ಮ ಎದೆಗಳ ರಕ್ತ 
ಬಸಿದು...

No comments:

Post a Comment