Thursday, March 17, 2011

ಸ್ಪಲ್ಪ ಮಾನವೀಯತೆ ಉಳಿಸಿಕೊಳ್ಳಿ...

ಅಧಿಕಾರ ಎಂಬ ಗುಮ್ಮ ಆವರಿಸಿರುವ ಮಹಾಸ್ವಾಮಿಗಳಿಗೆ ಅವರ ಕೆಳಗಿನವರು ಮಾಡುವುದೆಲ್ಲದರಲ್ಲೂ ತಪ್ಪುಗಳೇ ಕಂಡುಬರುತ್ತವೆ. ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು . ಅದರಲ್ಲೂ ಸುದ್ದಿವಾಹಿನಿಗಳ ಇಂದಿನ 'ಮಾನ್ಯ ಸುದ್ದಿ ಸಂಯೋಜಕ'ರುಗಳು ಈ ವಿಷಯದಲ್ಲಿ ಒಂದು ಹೆಜ್ಜೆ ಯಾವಾಗಲೂ ಮುಂದೇ... ಸುದ್ದಿವಾಹಿನಿಗಳ ಈ 'ಹಾರಾಟಗಾರ'ರ ಈ ನೀತಿಯನ್ನು ವಿರೋಧಿಸುವ ಗಟ್ಟಿದನಿಗಳಿನ್ನೂ ಎದ್ದಿಲ್ಲ. ಅದರಲ್ಲೂ ಜಿಲ್ಲೆಗಳಲ್ಲಿ 'ದುಡಿಯುವ' ಅನ್ಯಜಿಲ್ಲೆಗಳ ಬಡಪಾಯಿ ವರದಿಗಾರರ ಪಾಲಿಗಂತೂ ಈ 'ಪಿತೃಪಿತಾಮಹರು' ಮಗ್ಗುಲ ಮುಳ್ಳು. ಅಲ್ಲೆಲ್ಲೋ ಯಾವುದೋ ಘಟನೆ ನಡೆದರೆ ಅದು ಜಿಲ್ಲಾ ವರದಿಗಾರರ ಕಣ್ಣಿಗೆ ನೇರವಾಗಿ 'ಗೋಚರಿಸಲು' ನಡೆಯುವ ಘಟನೆಗಳು ಹೇಳೀಕೇಳಿ ನಡೆಯುತ್ತವೆಯೇ?... 
ಅರ್ಥಮಾಡಿಕೊಳ್ಳಬೇಕು, ಇಲ್ಲವಾದರೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು..,, ಕೇವಲ ಅಧಿಕಾರ ಮಧದಿಂದ ಮೆರೆಯುವುದಲ್ಲ.......

No comments:

Post a Comment